ಒಂದೇ ಮುಷ್ಠಿ ಒಂದೇ ತಂತ್ರ

“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ
ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||”

ಒಂದು ಮುಷ್ಠಿ ಒಂದೇ ತಂತ್ರ
ಐಕ್ಯತೆ ಒಂದೇ ಮಂತ್ರ ಒಂದೇ
ಜಾತಿ ಭೇದ ಭಾವ ದೃಷ್ಟಿ
ಎಲ್ಲಾ ಒಂದೇ ಸೃಷ್ಟಿಯೂ ||

ರೆಂಬೆ ಕೊಂಬೆ ಒಂದೇ ಹಸಿರು
ನೆಲದ ಬೇರು ಮಣ್ಣ ಬಸಿರು
ಹೂವು ಹಣ್ಣು ಕಾಯಿ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ಕಡಲ ತೀರ ಧರೆಯು ಒಂದೇ
ಮುತ್ತು ರತ್ನ ಹೊನ್ನು ಬೆಳ್ಳಿ
ಜೀವ ಜೀವನ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ವೇದ ಮಂತ್ರ ಧರ್ಮ ಒಂದೇ
ರಾಮ ರಹಿಮ ಏಸು ಬುದ್ಧ
ವೇಷ, ಭಾಷೆ ನೀತಿ ನೇಮ
ಎಲ್ಲಾ ಒಂದೇ ಸೃಷ್ಟಿಯೂ ||

ಒಂದೇ ಸಂಸ್ಕೃತಿ ಒಂದೇ ತತ್ವ
ದ್ವೇಷ ಕ್ಲೇಶ ಎಲ್ಲಾ ಅಂತ್ಯ
ಭಾರತೀಯರು ನಾವು ಧನ್ಯರು
ಕನ್ನಡ ತಾಯೆ ಮಡಿಲು ಮಾನ್ಯವು

“ನಮಾಮಿತಂ ನಮಾಮಿತಂ ಭೂಗರ್ಭಧಾತಂ
ಸರ್ವಂ ಸುಖ ಪ್ರಾತ್ಪಂ ಸರ್ವ ಜೀವ ಜೀವಾತ್
ಓಂ ಶಾಂತಿಃ ಶಾಂತಿಃ ಶಾಂತಿಃ”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಘಾತ
Next post ಹೀಗೊಂದು ಕವಿತೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys